ಆಂಜನಾದ್ರಿ ಬೆಟ್ಟದಿಂದ ಗುಜರಾತಿಗೆ ಶಿಲೆಯನ್ನು ತೆಗೆದುಕೊಂಡ ಹೋದ ವಜುಭಾಯಿ ವಾಲಾ

ಕೊಪ್ಪಳ: ಇಂದು ಕೊಪ್ಪಳಕ್ಕೆ ಬಂದಿಳಿದ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಭೇಟಿಕೊಟ್ಟು ಪೂಜೆಸಲ್ಲಿಸಿ ಶಿಲೆಯನ್ನು ತೆಗೆದುಕೊಂಡು ಹೋಗಿದ್ದಾರೆ.

ಅಂಜನಾದ್ರಿ ಪರ್ವತಕ್ಕೆ ರಾಜ್ಯಪಾಲರು ಶಿಲಾ ಪೂಜೆಗಾಗಿ ಇಂದು ಆಗಮಿಸಿದ್ದರು. ವಜುಭಾಯಿ ವಾಲಾ ತಮ್ಮೂರಿನ ಗುಜರಾತ್ ರಾಜ್ಯದ ಲಾಂಬವೇಲದಲ್ಲಿ ಹನುಮ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಇದೇ ಕಾರಣಕ್ಕೆ ವಜುಭಾಯಿ ವಾಲಾ ಹನುಮ ಹುಟ್ಟಿದ ಸ್ಥಳದಿಂದ ಶಿಲೆ (ಕಲ್ಲು) ತಗೆದುಕೊಂಡು ಹೋಗಿ ಹನುಮ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ.

ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಲ್ಲು (ಶಿಲೆ) ತಗೆದುಕೊಂಡು ಹೋಗಿದ್ದಾರೆ. ಬೆಂಗಳೂರು, ಗುಜರಾತ್‍ನಿಂದ ಬಂದ ಅರ್ಚಕರಿಗೆ  ಅಂಜನಾದ್ರಿ ಬೆಟ್ಟದ ಆಂಜನೇಯಯನಿಗೆ ಅರ್ಚಕರು ಸುಮಾರು ಒಂದು ಗಂಟೆಗಳ ಕಾಲ ಪೂಜೆ ಸಲ್ಲಿಸಿ ಶಿಲೆಯನ್ನ ನೀಡಿದ್ದಾರೆ.

Comments

Leave a Reply

Your email address will not be published. Required fields are marked *