ಅ.23ರಿಂದ ಬೆಂಗಳೂರಿನಿಂದ ಪುದುಚೇರಿಗೆ KSRTC ಬಸ್ ಸಂಚಾರ

ಬೆಂಗಳೂರು: ಅಕ್ಟೋಬರ್ 23ರಿಂದ ಬೆಂಗಳೂರಿನಿಂದ ಪುದುಚೇರಿಗೆ ಸಾರಿಗೆ ಬಸ್ ಗಳು ಸಂಚಾರ ಆರಂಭ ಮಾಡಲಿವೆ. ಅನ್‍ಲಾಕ್ ಬಳಿಕ ಸಾರಿಗೆ ಸಂಸ್ಥೆ ಹಂತ ಹಂತವಾಗಿ ಸಾರಿಗೆ ಬಸ್ ಸಂಚಾರ ಆರಂಭಿಸುತ್ತಿದೆ.

ಕೊರೊನಾ ಮತ್ತು ಲಾಕ್‍ಡೌನ್ ಬಳಿಕ ಅಂತರಾಜ್ಯ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬಸ್ ಆರಂಭಗೊಂಡಿವೆ. ಜನದಟ್ಟನೆಗೆ ಅನುಗುಣವಾಗಿ ಬಸ್ ಗಳನ್ನು ಬಿಡಲಾಗುವುದು ಎಂದು ಸಾರಿಗೆ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಗಳನ್ನು WWW.KSRTC.in ವೆಬ್ ಸೈಟ್ ಮೂಲಕ ಕಾಯ್ದಿರಿಸಬಹುದು. ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೆಎಸ್‍ಆರ್ ಟಿಸಿ ಸೂಚಿಸಿದೆ.

ಹೊಸ ನೇಮಕ ಇಲ್ಲ: ಕೋವಿಡ್-19 ಹಿನ್ನೆಲೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನ ಕೆಎಸ್‍ಆರ್ ಟಿಸಿ ರದ್ದುಗೊಳಿಸಿದೆ. ಕೋವಿಡ್ ನಿಂದಾಗಿ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಮುಂದಿನ ಆದೇಶದವರೆಗೆ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ ರದ್ದು ಮಾಡಲಾಗಿದೆ.

Comments

Leave a Reply

Your email address will not be published. Required fields are marked *