ಅಪರಿಚಿತ ಗುಂಪಿನಿಂದ ಹಲ್ಲೆ – ಗಂಭೀರ ಗಾಯಗೊಂಡು ಟ್ರಕ್ ಚಾಲಕ ಸಾವು

ನವದೆಹಲಿ: ಟ್ರಕ್ ಚಾಲಕನ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ದೆಹಲಿಯ ತ್ರಿಪುರದ ಧಲೈ ಜಿಲ್ಲೆಯಲ್ಲಿ ನಡೆದಿದೆ.

ಚಾಲಕನನ್ನು ಪ್ರದೀಪ್(54) ದೇಬ್ನಾಥ್ ಎಂದು ಗುರುತಿಸಲಾಗಿದ್ದು, ಈತ ಅಸ್ಸಾಂನ ತೆಲಿಯಮುರಾದ ನಿವಾಸಿ. ಅಂಬಾಸ್ಸಾ ಎಂಬ ಪಟ್ಟಣದ ಹೊರವಲಯದಲ್ಲಿರುವ ಶಾಲೆಯ ಬಳಿ ಈ ಘಟನೆ ನಡೆದಿದ್ದು, ಪ್ರದೀಪ್ ದೇಬ್ನಾಥ್ ಸಹಾಯಕ ಮಲಗಿದ್ದ ಸಮಯದಲ್ಲಿ ಆರೋಪಿಗಳು ಆತನ ಬಳಿ ಇದ್ದ 40,000 ರೂ.ಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತಂತೆ ತನಿಖೆ ವೇಳೆ ಮಹೀಂದ್ರಾ ಬೊಲೆ ಬಳಿ ಟ್ರಕ್‍ನನ್ನು ನಿಲ್ಲಿಸಿ ಪ್ರದೀಪ್ ದೇಬ್ನಾಥ್‍ರನ್ನು ವಾಹನದಿಂದ ದುಷ್ಕರ್ಮಿಗಳು ಹೊರಗೆ ಎಳೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಪ್ರದೀಪ್ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ತೀವ್ರವಾಗಿ ಗಾಯಗೊಂಡ ಪ್ರದೀಪ್ ದೇಬ್ನಾಥ್ ರಸ್ತೆಯ ಬಳಿ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಸ್ಥಳೀಯರು ಪ್ರದೀಪ್ ಬಳಿ ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಅವರು ಕೂಡಲೇ ಜಿಲ್ಲೆಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಪ್ರದೀಪ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *