ಅಗತ್ಯ ವಸ್ತು ಖರೀದಿಗೆ ಬಳಸಬಹುದು ವಾಹನ – ಒಂದೇ ದಿನಕ್ಕೆ ರೂಲ್ಸ್ ಚೇಂಜ್

ಬೆಂಗಳೂರು: ಸರ್ಕಾರದ ಕಠಿಣ ಲಾಕ್‍ಡೌನ್‍ನ ಎರಡನೇ ದಿನ ಆರಂಭವಾಗಿದ್ದು, ಅಗತ್ಯ ವಸ್ತು ಖರೀದಿಗೆ ವಾಹನ ಬಳಸಲು ಅವಕಾಶ ನೀಡಲಾಗಿದೆ.

ಲಾಕ್‍ಡೌನ್‍ನ ಮೊದಲ ದಿನವೇ ನಿಯಮ ಬದಲಾಗಿದೆ. ದಿನಸಿ, ಹಣ್ಣು ಸೊಪ್ಪು ತರಕಾರಿ ಖರೀದಿಗೆ ವಾಹನ ಬಳಸಬಹುದು. ಆದರೆ ನಿಮ್ಮ ನಿಮ್ಮ ಏರಿಯಾಗಳಲ್ಲಷ್ಟೇ ಖರೀದಿಗೆ ಅವಕಾಶ ಇದೆ. ಅನಗತ್ಯವಾಗಿ ಏರಿಯಾದಿಂದ ಏರಿಯಾಗೆ ವಾಹನಗಳಲ್ಲಿ ಬರುವಂತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಹತ್ತಿರದ ಅಂಗಡಿಗೆ ತೆರಳಲು ಗಾಡಿ ಬಳಸಬಹುದು.

ಅಗತ್ಯ ವಸ್ತು ಖರೀದಿಗೆ ವಾಹನ ಬಳಸಬಹುದು ಅಂತ ಅಡ್ಡಾಡಬೇಡಿ. ಯಾಕಂದರೆ ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಖಾಕಿ ಗಸ್ತು ತಿರುಗುತ್ತಿದೆ. ಮುಖ್ಯ ರಸ್ತೆಗಳಲ್ಲಿ ಎಂದಿನಂತೆ ಚೆಕ್ಕಿಂಗ್ ನಡೆಯುತ್ತದೆ. ಅನಗತ್ಯವಾಗಿ ಓಡಾಡಿದ್ರೆ, ವಾಹನಗಳ ಸೀಜ್ ಆಗೋದು ಪಕ್ಕಾ ಆಗಿದೆ. ಹೀಗಾಗಿ ನೆಪ ಹೇಳಿಕೊಂಡು ತಿರುಗಾಡೋದು ಬಿಡಿ. ಮನೆಯಲ್ಲೇ ಇದ್ದು ಲಾಕ್‍ಡೌನ್‍ಗೆ ಸಹಕರಿಸಿ, ಕೊರೊನಾ ಚೈನ್ ಬ್ರೇಕ್ ಮಾಡಿ.

Comments

Leave a Reply

Your email address will not be published. Required fields are marked *