ಅಕ್ಕಿ ಕೇಳಿದ್ದಕ್ಕೆ ಸಾಯೋರು ಸಾಯ್ಲಿ ಅಂದ ಸಚಿವ ಉಮೇಶ್ ಕತ್ತಿ

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟವಾಗಿದೆ. ಆದರೆ ಇತ್ತ ಆಹಾರ ಸಚಿವ ಉಮೇಶ್ ಕತ್ತಿ ಉಡಾಫೆಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು. ರೈತ ಸಂಘ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯರ ಅವರು ಕತ್ತಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಈಶ್ವರ ಅವರು ಪಡಿತರ ಅಕ್ಕಿ ಕಡಿತಗೊಳಿಸಿರುವುದರ ಸಂಬಂಧ ಸಚಿವರನ್ನು ಪ್ರಶ್ನಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ ಕೊಡ್ತೀವಿ. ಲಾಕ್‍ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಕತ್ತಿ ಉತ್ತರಿಸಿದ್ದಾರೆ.

ಈ ವೇಳೆ ಮಾತು ಮುಂದುವರಿಸಿದ ಈಶ್ವರ, ಲಾಕ್‍ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಮರುಪ್ರಶ್ನೆ ಹಾಕಿದ್ದಾರೆ. ಆಗ ಸಚಿವರು, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಮಾತಾಡಿದ್ದಾರೆ. ಅಲ್ಲದೆ ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.

ಫೋನು ಸಂಭಾಷಣೆ ಹೀಗಿದೆ:
ಈಶ್ವರ್: 2 ಕೆಜೆ ಅಕ್ಕಿ ಮಾಡಿದ್ದೀರಾ ಸಾಲುತ್ತಾ..?
ಉಮೇಶ್ ಕತ್ತಿ: 3 ಕೆಜಿ ರಾಗಿ ಮಾಡಿತ್ತೀವಿ..
ಈಶ್ವರ್: ಉತ್ತರ ಕರ್ನಾಟಕ ಜನ ರಾಗಿ ತಿನ್ನುತ್ತಾರಾ..?
ಮಂತ್ರಿ: 2 ಕೆಜಿ ಜೋಳ ಮಾಡಿದ್ದೀವಿ
ಜನ: ತಿಂಗಳಿಗೆ 2ಕೆ.ಜಿ ಸಾಲುತ್ತಾ ಸರ್
ಮಂತ್ರಿ: ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತೆ


ಜನ: ಯಾವಾಗ ಕೊಡುತ್ತೀರಾ..?
ಮಂತ್ರಿ: ಬರುವ ತಿಂಗಳು ಮೇ ನಲ್ಲಿ ನೀಡುತ್ತೇವೆ
ಜನ: ಬರುವ ತಿಂಗಳು ಕೊಡುತ್ತೀರಾ..? ಅಲ್ಲಿಯವರೆಗೆ ಉಪವಾಸ ಇರುದಾ ಅಥವಾ ಸತ್ತುಹೋಗುದಾ..?
ಮಂತ್ರಿ: ಸತ್ತುಹೋಗುವುದು ಒಳ್ಳೆದು. ಅದಕ್ಕಿಂತ ಫೋನ್ ಮಾಡುವುದು ಬಿಡಿ.
ಜನ: ಸರ್, ನೀವು ಮಂತ್ರಿಗಳು ಜನಕ್ಕೆ ಉತ್ತರಿಸಬೇಕಾದವರು ನೀವು.

Comments

Leave a Reply

Your email address will not be published. Required fields are marked *