ಅಂಫಾನ್ ಚಂಡಮಾರುತ – ಐಎಂಡಿಯನ್ನು ಶ್ಲಾಘಿಸಿದ ವಿಶ್ವ ಹವಾಮಾನ ಸಂಸ್ಥೆ

ನವದೆಹಲಿ: ಅಂಫಾನ್ ಚಂಡಮಾರುತ ಸಂಬಂಧ ನಿಖರ ಮಾಹಿತಿಯನ್ನು ನೀಡಿ ಭಾರೀ ಅನಾಹುತವನ್ನು ತಪ್ಪಿಸಿದ್ದಕ್ಕೆ ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯೂಎಂ) ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯನ್ನು ಶ್ಲಾಘಿಸಿದೆ.

ಜೂನ್ 2 ರಂದು ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ ಮಹಾಪಾತ್ರ ಅವರಿಗೆ ಡಬ್ಲ್ಯೂಎಂಒ ಕಾರ್ಯದರ್ಶಿ ಜನರಲ್ ಇ ಮನನೆಕೋವಾ ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದಾರೆ.

ಯಾವಾಗ ಚಂಡುಮಾರುತ ಬರುತ್ತದೆ? ಅದರ ಪಥ ಹೇಗಿರಲಿದೆ? ಯಾವೆಲ್ಲ ಪ್ರದೇಶಗಳಿಗೆ ಹಾನಿಯಾಗಬಹುದು? ಗಾಳಿಯ ವೇಗ ಎಷ್ಟಿರಬಹುದು ಈ ಬಗ್ಗೆ ಐಎಂಡಿ ಮೂರು ದಿನದ ಮೊದಲೇ ನಿಖರವಾಗಿ ಊಹಿಸಿ ಮಾಹಿತಿ ನೀಡಿತ್ತು. ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯವಾಯಿತು ಎಂದು ಡಬ್ಲ್ಯೂಎಂಒ ಪತ್ರದಲ್ಲಿ ಶ್ಲಾಘಿಸಿದೆ.

ಐಎಂಡಿಯ ಸೇವೆ ನಮಗೆಲ್ಲ ‘ಅತ್ಯುತ್ತಮ ಪಾಠ’ ಎಂದು ಡಬ್ಲ್ಯೂಎಂಒ ಬಣ್ಣಿಸಿದೆ. ಅಷ್ಟೇ ಅಲ್ಲದೇ ಡಬ್ಲ್ಯೂಎಂಒ ಸಿಂಗಾಪುರ, ಬಹರೇನ್ ದೇಶಗಳಿಗೂ ಐಎಂಡಿ ನೀಡಿದ ಡೇಟಾವನ್ನು ಅಧ್ಯಯನಕ್ಕೆ ಕಳುಹಿಸಿ ಕೊಟ್ಟಿದೆ.

199ರ ನಂತರ ಬರುತ್ತಿರುವ ಈ ಸೂಪರ್ ಚಂಡಮಾರುತ ಭಾರೀ ಅನಾಹುತವನ್ನೇ ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿತ್ತು. ಹೀಗಾಗಿ ಭಾರತ ಮೊದಲೇ ಶ್ರೀಲಂಕಾ, ಬಾಂಗ್ಲಾದೇಶಕ್ಕೆ ಮಾಹಿತಿ ರವಾನಿಸಿತ್ತು. ಎರಡು ದಿನಕ್ಕೂ ಮೊದಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಭಾಗದಲ್ಲಿದ್ದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಮಾಡಿದ್ದು ಯಾಕೆ?

ಮೇ 18ರಂದು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಅಂಫಾನ್ ಚಂಡಮಾರುತ ಮೇ 20ರಂದು ಪಶ್ಚಿಮ ಬಂಗಾಳದ ಸುಂದರ್ ಬನ್ ಮತ್ತು ಕರಾವಳಿ ಭಾಗಕ್ಕೆ ಅಪ್ಪಳಿಸಿತ್ತು. 260 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು ಒಟ್ಟು ಭಾರತದಲ್ಲಿ 90ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

https://www.facebook.com/publictv/posts/4369546059729779

 

Comments

Leave a Reply

Your email address will not be published. Required fields are marked *