ಅಂಗಡಿಗಳ ಮೇಲೆ ನುಗ್ಗಿತು ಕಸ ವಿಲೇವಾರಿ ಟ್ರಕ್ – ಅಪಾಯದಿಂದ ಜನ ಪಾರು

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಟ್ರಕ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅಂಗಡಿಗೆ ನುಗ್ಗಿ, ಹಲವು ವಾಹನಗಳು ಜಖಂಗೊಂಡಿರುವ ಘಟನೆ ನಗರದ ಕಂಕನಾಡಿ ಮಾರ್ಕೆಟ್ ನಲ್ಲಿ ನಡೆದಿದೆ.

ಅಪಘಾತದಲ್ಲಿ ಮೂರು ಕಾರು, ಟೆಂಪೋ, ಬೈಕ್ ಹಾಗೂ ಎರಡು ಅಂಗಡಿಗಳಿಗೆ ಹಾನಿಯಾಗಿದೆ. ಚಾಲಕನ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣವಾಗಿದೆ. ಚಾಲಕ ಟ್ರಕ್ ನಿಲ್ಲಿಸಿ, ಕೆಳಗಿಳಿದು ಮೊಬೈಲ್ ನಲ್ಲಿ ಮಾತನಾಡುವುದರಲ್ಲಿಯೇ ತಲ್ಲೀನನಾಗಿದ್ದ ವೇಳೆ ಚಾಲನಾ ಸ್ಥಿತಿಯಲ್ಲಿದ್ದ ಟ್ರಕ್ ವೇಗವಾಗಿ ಮುಂದಕ್ಕೆ ಚಲಿಸಿ, ವಾಹನಗಳ ಸಹಿತ ಅಂಗಡಿಗೆ ಡಿಕ್ಕಿಯಾಗಿದೆ.

ಘಟನೆಯ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಂಕನಾಡಿ ನಗರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಗಡಿಗೆ ನುಗ್ಗಿದ ಟ್ರಕ್‍ನ್ನು ಕ್ರೇನ್ ಮೂಲಕ ತೆರವುಗೊಳಿಸಲಾಗಿದೆ.

Comments

Leave a Reply

Your email address will not be published. Required fields are marked *